Thursday, November 26, 2009

ಬಾರೆ...


ದೂರ ದೂರದ ದಿಗಂತದಲಿ
ಕಂಗಳಿಗೆ ಕಾಣಿಸದ ಕ್ಷಿತಿಜದಲಿ..
ನಿಂತು ಕಂಗೊಳಿಸುತಿಹೆ
ಓ ಅದಮ್ಯ ಚೇತನವೇ!
ಭುವಿಗಿಳಿದು ಬಳಿಬಂದು
ಉದಾರತೆಯಿಂ ಉದ್ಧರಿಸು..
ಕಲ್ಪನೆಯ ಛಾಯೆಯ ಕಳಚಿ..
ನಲುಮೆ ನೌಕೆಯಾ ಏರಿ.
ನೀರು ಕಾಣದ ನೆಲ ನನ್ನೀ ಮನಸು!
ಬಂದು ಜೀವಿತದಾಸೆಯ ಚಿಗುರನೊಡೆಸು.
ನನ್ನೀ ಹಂಬಲವ ಮರೀಚಿಕೆಯ ಮಾಡದೆ..
ಬಾರೆ ಚೇತನವೇ!
ಮತಿಯ ಮುಚ್ಚಿರುವ ತಮವ ತಾ ಕಳೆಯೆ ಬಾ..
ಚಿತ್ತವನಾವರಿಸಿರುವ ಚಿಂತೆಯ ಕಿತ್ತೊಗೆಯೆ ಬಾ..
ಬಾರೆ ಚೇತನವೇ!
ಚಿರವಿರಹಿಯಾಗಿಸಬೇಡ..
ಚಿರಕನ್ನಿಕೆಯೇ..ನನ ಚೇತನವೇ ಬಾ..


No comments:

Post a Comment