Wednesday, March 19, 2014

ವಿರಹದ ಪರಿ

 
ಬಿರುಬಿಸಿಲೀ ಬೆಳುದಿಂಗಳು
ಬರಹೇಳೆ ಸಖೀ ಇನಿಯನ
ಸೊರಗಿಹ ಈ ಕಂಗಳಿಗೆ
ದೊರೆ ಕಾಣದೇ ತಣಿಯೆ ನಾ..
 
ಜಾರಚೋರ ಸ್ವಾಮಿ ನನ್ನ
ಪಾರು ಮಾಡೋ ವಿರಹದಿಂ
ದೂರ ತೀರ ಸೇರುವಾಸೆ
ಕಾರಿರುಳ ನೀ ಸರಿಸು ಬಾ..