Friday, July 16, 2010

ಜೀವ - ಜೀವನ.

ನನಗೀಗ ೨೨ ನೇ ವರ್ಷ ನಡೀತಾ ಇದೆ. ಬುದ್ಧಿ ಬಂದಾಗಿನ್ದ್ಲೂ, ಅಂದ್ರೆ ಸುಮಾರು ೧೯ ವರ್ಷಗಳಿಂದಲೂ ನನ್ನ ಪ್ರಪಂಚ ಒಂದೇ - "ಮೈಸೂರು".
ಏನಿಲ್ಲ ಈ ಊರಲ್ಲಿ? ಖಾಲಿ ಖಾಲಿ ರಸ್ತೆಗಳು, ನಂಬಿಕಸ್ಥ ಜನಗಳು. ನೆಳಲನೀವ ಮರಗಳು, ಮುದವನೀವ ಕೆರೆಗಳು! ಧರ್ಮ ಬೆಳಗಿಪ ಗುಡಿಗಳು!

೧೦ ನಿಮಿಷದಲ್ಲಿ, ಮಾಯಾನಗರಿ ಬೆಂಗಳೂರಲ್ಲಿ ಒಂದು ರಸ್ತೇನ ಆ ಕಡೆಯಿಂದ ಈ ಕಡೆ ದಾಟೋಕೆ ಹೆಣಗಾಡಬೇಕು.. ಅದೇ ೧೦ ನಿಮಿಷ  ತಗೊಂಡು, ಒಂದು ಗಾಡಿ ಇದ್ರೆ, ಇಡೀ ಮೈಸೂರನ್ನೇ ಒಂದು ಸುತ್ತು ಹಾಕಬಹುದು. ಅದೇ ಮೈಸೂರು! ಎಲ್ಲಿಂದೆಲ್ಲಿಗೆ ಹೋದರೂ ಅಬ್ಬಬ್ಬ ಅಂದ್ರೆ ೧೫ ನಿಮಿಷ ತಗೊಂಡ್ರೆ ಹೆಚ್ಚು! ಬೇಕಾದಾಗ ಕಾರಂಜಿ ಕೆರೆ, ಬೇಡವಾದಾಗ ಕುಕ್ಕರಹಳ್ಳಿ ಕೆರೆ. ಖುಷಿ ಆದ್ರೆ ಚಾಮುಂಡಿ ಬೆಟ್ಟ - ರಸ್ತೆ ಮೇಲೆ. ಪುರುಸೋತ್ತಿದ್ರೂ ಚಾಮುಂಡಿ ಬೆಟ್ಟ - ಮೆಟ್ಟಿಲು ಹತ್ಕೊಂಡು! ಉತ್ತರಕ್ಕೆ ಅರ್ಧ ಗಂಟೆ ಶ್ರೀರಂಗಪಟ್ನ, ದಕ್ಷಿಣಕ್ಕೆ ಅರ್ಧ ಗಂಟೆ ನಂಜನಗೂಡು! ಪಶ್ಚಿಮಕ್ಕೆ ಅರ್ಧ ಗಂಟೆ ಸೋಮನಾಥಪುರ, ಪೂರ್ವಕ್ಕೆ ಅರ್ಧ ಗಂಟೆ ಮೀನಾಕ್ಷಿಪುರ! ಕೂಗಳತೆಯ ದೂರದ ರಂಗಾಯಣ, ನಟನ.. ಹ್ಮ್ಮ್ಮ್... ಇನ್ಮೇಲೆ ಇವೆಲ್ಲ ನಂಗೆ 'ಇತಿಹಾಸ' ಆಗುತ್ತೋ ಏನೋ ಅಂತ ದಿಗಿಲಾಗ್ತಿದೆ! ದಿನಾ ಬೆಟ್ಟ ಹತ್ತಿ ಇಳಿಯೋದ್ರಲ್ಲಿ ಇರೋ ಖುಷಿನೇ ಬೇರೆ. ಬಂಡೆ ಮೇಲೆ ಕೂತು ಇಡೀ ಊರನ್ನೇ ನೋಡೋ ಮಜಾ ಇನ್ನೇನು ಮುಗಿಯುತ್ತಲ್ಲ ಅನ್ನೋ ಬೇಸರ. ಜಿ.ಟಿ.ಆರ್. ಮಸಾಲೆ ದೋಸೆ, ಗ್ರೀನ್ ಲೀಫ್ ಬಿಸಿ ಬಿಸಿ ಕಾಫಿ, ಬಾಂಬೆ ಟಿಫಾನೀಸ್ - ಮಹಾಲಕ್ಷ್ಮಿ ಸ್ವೀಟ್ಸ್ ಮೈಸೂರು ಪಾಕ್! ಸಿಂಡ್ರೆಲಾ-ಅಕ್ಲು ಆಲೂ ಪರಾಟ,., ಮಹೇಶ್ ಪ್ರಸಾದ್ ಇಡ್ಲಿ ವಡೆ.. ಖಾನ ಖಜಾನ ಮಲ್ಲಿಗೆ ಇಡ್ಲಿ..ಫಲಾಮೃತ ಐಸ್ ಕ್ರೀಮ್..ಹನುಮಂತು ಚಿಕನ್ ಬಿರಿಯಾನಿ, ಆರ್.ಆರ್.ಆರ್ ಅನ್ಲಿಮಿಟೆಡ್ ಊಟ, ಚಾಟ್ ಸ್ಟ್ರೀಟ್ ಬಗೆ ಬಗೆ ಭಕ್ಷ್ಯಗಳು...ಅಯ್ಯೋ ಏನೇನೆಲ್ಲ ಬಿಟ್ಟು ಹೋಗಬೇಕೋ ದೇವನೇ! ಇವೆಲ್ಲ ಬೇರೆ ಕಡೆನೂ ಸಿಗಬಹುದು, ಅಥವಾ ಇದಕ್ಕಿಂತ ಚೆನ್ನಾಗಿರಬಹುದು. ಆದ್ರೆ ಈ "ಇವುಗಳು" ಕೊಡೊ ಮುದ ಬೇರೆ ಏನೂ ಕೊಡಕ್ಕಾಗದೆ ಇರಬಹುದು! :)

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ, ಜೀವನೋಪಾಯ ಹುಡುಕ್ಕೊಂಡು ಮಾಯಾನಗರಿ ಬೆಂಗಳೂರಿಗೆ ಹೊರಡೋದಕ್ಕೆ ನನ್ನನ್ನು ನಾನು ತಯಾರು ಮಾಡಿಕೊಳ್ತಾ ಇದ್ದೀನಿ! ಮೈಸೂರು ನಂಗೆ ಎಷ್ಟು ಒಳ್ಳೇ ರೀತೀಲಿ ಬೇಕಾದಷ್ಟು ವಿಷಯಗಳನ್ನು ಕಲಿಸಿದೆಯೋ, ಅದೇ ರೀತಿ ಬೆಂಗಳೂರು ಮಾಡುತ್ತ ಅನ್ನೋದು ನನ್ನ ಮುಂದಿರುವ ಪ್ರಶ್ನೆ! ಅದು ನನ್ನನ್ನು ಅಪ್ಪಿಕೊಳ್ಳದಿದ್ದರೂ ಸೈ, ಸುಮ್ಮನೆ ಒಪ್ಪಿಕೊಂಡರೆ ಸಾಕು :)
ನನಗಲ್ಲಿ ಒಳಿತಾಗದಿದ್ದರೂ ಚಿಂತಿಲ್ಲ, ಕೆಡುಕಾಗದಿದ್ದರೆ ಸಾಕು! ವೈಪರೀತ್ಯ ನೋಡಿ, ಜೀವನ ಹುಡುಕ್ಕೊಂಡು, ಜೀವದ ಊರನ್ನು ಬಿಡೋ ಥರ ಆಗಿದೆ ಪರಿಸ್ಥಿತಿ! ಒಮ್ಮೆ ಯೋಚನೆ ಬರೋದು ಹೇಗೆ ಅಂದ್ರೆ, ಬಯಲು ನಾಡು ಮೈಸೂರನ್ನ ಇಷ್ಟು ಪ್ರೀತಿಸೋ ನನಗೆ ಹೀಗನ್ನಿಸುವಾಗ, ಮಲೆನಾಡು-ಕರಾವಳಿ ಮಂದಿ ಅದ್ಹೇಗೆ ಇರ್ತಾರೋ ಅಂತ! ಅಂತಹವರನ್ನ ನೋಡ್ಕೊಂಡ್ ಸಮಾಧಾನ ಮಾಡ್ಕೊಬೇಕು ಅಷ್ಟೇ!

ಬೈ "MY"ಸೂರು!

10 comments:

  1. ನಮ್ಮ ಬೆಂಗಳೂರಿಗೆ ಸ್ವಾಗತ..
    ನಿಮ್ಮವ,
    ರಾಘು.

    ReplyDelete
  2. Namma Beautiful Bangalore ge Swagatha Karthik.

    ReplyDelete
  3. ಕಾರ್ತೀಕ,
    ಇದುವೇ ಜೀವನ. ಬೆಂಗಳೂರಿಗೆ ಹೋದರೂ ಮೈಸೂರು ನಿಮ್ಮ ಹೃದಯದಲ್ಲೇ ಇರುತ್ತದೆ,ಅಲ್ಲವೆ?

    ReplyDelete
  4. ರಾಘು ಮತ್ತು ನಿಶಾ ಅವರಿಗೆ ಧನ್ಯವಾದಗಳು!
    ಸುನಾಥ್ ಅವರಿಗೂ ಕೂಡ ಧನ್ಯವಾದಗಳು! :) ನೀವೆಲ್ಲರೂ ಇದ್ದೀರಿ ಅಂದ್ರೆ ಬೆಂಗಳೂರು ಚೆನ್ನಾಗಿಯೇ ಇರುತ್ತೆ! ಸಹೃದಯರೆಲ್ಲರಿಗೂ ಧನ್ಯವಾದಗಳು, ಮತ್ತೊಮ್ಮೆ.

    ReplyDelete
  5. kaartik mysooru nenapu jnaapisoke naaniddene. nimma nenapugalu sada hasiraagirali.

    ReplyDelete
  6. I feel like going back to Sirsi...NOW!! Wonderfully written :)

    ReplyDelete
  7. Hindi dialogue: KucH PaanE kE liyE kucH khOnA paDEgaa!

    Kannada: Manushya hOdalli; mara ninthalli !
    English : When you are in Rome, be a Roman!

    I would say,
    everything has a saturation limit. Stay in BengaLuru for the time being. You can roll back to Mysooru at any time!

    Moreover, anyone can perform SRK's role if he/she has a proper 'SWADES' story in his/her mind :)

    ReplyDelete